ಪ್ರೀತಿಯನ್ನು ಗಳಿಸಿದ ಪ್ರೇಮಿಗಳು ಅವರಿಗೆ ನೀಡಿದ ನಿಷ್ಕಲ್ಮಶ ಹಿರಿಯರ ಪ್ರೇಮದ ಬಗ್ಗೆ ಸಹ ಎಚ್ಚರವಹಿಸಬೇಕು. ಪ್ರೀತಿ ಮಾಡಿ ಓಡಿಹೋಗಬೇಡಿ ಆದರೆ ಹಿರಿಯನ್ನು ಒಪ್ಪಿಸಿ ಮದುವೆ ಆಗಿ ಎಂದು ಹೇಳುವ ‘ಒನ್ ಟೈಮ್’ ಕನ್ನಡ ಸಿನಿಮಾ ರಾಜ್ ಅವರ ನಿರ್ದೇಶನದಲ್ಲಿ ಡಿಯೋಕ್ಸ್ ಎಂಟರ್ಟೈನ್ಮೆಂಟ್ ಅಡಿಯಲ್ಲಿ ಕಿರಣ್ ವಾಸುದೇವನ್ ಚಿತ್ರದ ನಿರ್ಮಾಪಕರು. ‘ಒನ್ ಟೈಮ್’...ಮಿಸ್ ಮಾಡ್ಕೊಬೇಡಿ ಸಿನಿಮಾಕ್ಕೆ ಪೂನಾದಲ್ಲಿ ನಡೆಯುವ ಡರ್ಟ್ ರೇಸ್ ಸಹ ಬಹು ಮುಖ್ಯ ಅಂಶ.
ಕನ್ನಡ ಚಿತ್ರ ರಂಗದ ಹೆಸರಾಂತ 14 ನಿರ್ದೇಶಕರುಗಳು ಈ ಚಿತ್ರದಲ್ಲಿ ಪಾತ್ರ ವಹಿಸಿದ್ದಾರೆ. ಹಿರಿಯರಾದ ಎಸ್ ಕೆ ಭಾಗ್ವನ್, ಕೆ ಎಸ್ ಎಲ್ ಸ್ವಾಮಿ, ಪಿ ಎನ್ ಸತ್ಯ, ವಿಜಯಲಕ್ಷ್ಮಿ ಸಿಂಗ್, ವಿಕ್ಟರಿ ವಾಸು, ಗಡ್ಡ ವಿಜಯ್ ....ಹಾಗೂ ಇನ್ನಿತರರು ಇದ್ದಾರೆ.
ತೇಜಸ್ ಹಾಗೂ ನೇಹ ಸಕ್ಸೇನ ಮುಖ್ಯ ತಾರಾಗಣದಲ್ಲಿ ಇದ್ದಾರೆ. ಅಭಿಮನ್ ರಾಯ್ ಅವರ ಸಂಗೀತ ಈಗಾಗಲೇ ಮಾಧುರ್ಯದ ಹಾಡುಗಳಿಗೆ ಜನ ಮೆಚ್ಚುಗೆ ಪಡೆದಿದೆ, ಸೂರ್ಯಕಾಂತ್ ಹೊನ್ನಲ್ಲಿ ಅವರ ಛಾಯಾಗ್ರಹಣ, ರಘು ಎಸ್ ಸಂಕಲನ, ತ್ರಿಭುವಣ್, ಮಹೇಶ್ ಕುಮಾರ್ ಹಾಗೂ ರಾಜ್ ಅವರ ನೃತ್ಯ ನಿರ್ದೇಶನ, ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ. ಡಾ ವಿ ನಾಗೇಂದ್ರ ಪ್ರಸಾದ್, ಅಭಿಮನ್ ರಾಯ್, ರೋಶನ್ ರಾಯ್, ರಾಜ್ ಅವರು ಗೀತ ಸಾಹಿತ್ಯ ಚಿತ್ರಕ್ಕೆ ಒದಗಿಸಿದ್ದಾರೆ.